ನಾಲ್ಕು ದಿನದ ಈ ಜನ್ಮ
ನೋಯುತಿ ಯಾಕೆ?
ಬಂದದ್ದು ಬರಲೆಂದು
ಮುಂದಡಿ ಇಡಬೇಕು
ಬರುವುದೆಲ್ಲಕ್ಕೂ ಹಸಿರ ನಿಶಾನೆ ತೋರುತಿರಬೇಕು
ಯಾವುದೂ ನನ್ನದಲ್ಲ
ಎಲ್ಲ ಅವನ ಕೊಡುಗೆ
ಎನ್ನುತಿರಬೇಕು
ಇದ್ದಕ್ಕಿದ್ದಂತೆ ಸಮಾಧಾನ ಚಿಮ್ಮುವುದು
ನೋಡಬೇಕು!!!

ಪ್ರಶಾಂತನ ಮನಸ್ಸು